ಗುರುವಾರ, ಫೆಬ್ರವರಿ 13, 2025

*ಹೀಗೊಂದು ಚಿಂತನೆ*!



ಕುಸುಮದಲಿ ಅರಳಿ 
ಶರ ವೇಗದಲಿ ಪ್ರೀತಿಸಿ 
ಭಾಮಿನಿಯಲಿ ಮುಳಗಿ 
ಭೋಗದಲಿ ತೇಲಾಡಿ 
ವಾರ್ಧಿಕದಲಿ ಎದ್ದು
ಪರಿವರ್ಧಿನಿಯಲಿ ಅರಿತು  
ಉದ್ದಂಡ ನಾಮ ಪಡೆದರೇನಂತೆ 

ಕಂದ, ವೃತ್ತ, ರಗಳೆಗಳಿಲ್ಲದೆ 
ಎಳೆ, ತ್ರಿಪದಿ, ಚೌಪದಿ ಷಟ್ಪದಿ 
ಆದಿ, ಅಂತ್ಯ ಮಧ್ಯ ಪ್ರಾಸದ 
ತ್ರಾಸವಿಲ್ಲದೆ ಭಾವಪೂರ್ಣ ಕವನವ  
ಬರೆದರೆ ಓದಲೋಲ್ಲರೇ ಜಗದೊಳು 

-ಪ್ರಭಂಜನ. 

ಮಾವಿನ ಮರ



ಹೊಳೆವ ಮಾವಿನ ಮರದ ಒಳಗೆ 
ಅಳಿಲು ದುಂಬಿ ಗುಬ್ಬಚ್ಚಿ ಇತ್ತು 
ಬೆಳಗು ಇರಳು ಆಡುತಿದ್ದವು    
ನಲಿದು ಚಿಲಿಪಿಲಿ ಗುಟ್ಟುತಾ   

ಹಳೆಯ ಮಾವಿನ ಮರದ ಬುಡವ  
ಕೆಳಗೆ ಕಡೆದರು ಮನೆಯ ಕಟ್ಟಲು 
ತಳಿರು ಎಲೆಗಳು ಉದುರಿಹೋದರೂ   
ಬೆಳೆದು ನಿಂತವು ಹೂಗಳು 

ಆಳಿದ ಮರಕ್ಕೂ ದುಂಬಿಹಾರಿ 
ಚಲುವ ಹೂವಲಿ ಮಕರಂದ ಹೀರಿ 
ಹಲವು ಕಾಯಿಗಳು ಒಡೆದು ಮೂಡಲು 
ಒಲವು ಮೂಡಿತು ಮರ ಉಳಿಸಲು

ಇಳೆಗೆ ಮುಖ ಮಾಡಿ ತೂಗುತಿದ್ದ
ಬೆಳೆದ ಮಾವಿನ ಕಾಯ ನೋಡುತ   
ಕಳಿತ ಫಲವನು ತೆಗೆದು ತಿನ್ನಲು 
ತೊಳೆದ ಬಾಯಲೂ ನೀರೂರಿತು 

ಉಳಿಸಿ ಮರವನು ನೆರಳು ತರುವುದು      
ಬೆಳಸಿ ಕಾಡನು ಮಳೆಯು  ಬರುವುದು  
ಇಳಿಗೆ ಹಸಿರನ ಸೀರೆ ಉಡಿಸಿ,ಮುಂದಿನ 
ಪೀಳಿಗೆಗೆ ಉಸಿರ ಕೊಡುವುದು     

ಪ್ರಭಂಜನ. 

ಮನಸ್ಸು!


ತಡವರಸೋ ಮನಸೇ 
ತುಸು ನಿಧಾನಿಸು 
ತಂಪೆರೆವೆ ತಂಗಾಳಿಯಂತೆ 

ತಲ್ಲಣವು ಬೇಡ 
ತಂಪಿನಲಿ  ಪ್ರೀತಿಸಿ  
ತಣ್ಣಗೆ ಬಿಗಿದಪ್ಪಿ ಬಿಡುವೆ 

ಮನಸಲ್ಲೇ ನೀನು 
ಮುಗುಳ್ನಗುತ ನನ್ನ 
ಮೋಹದಿ ಕರೆಯುತಿರುವೆ  

ಮನಸ್ಸೆ ನಿನ್ನ ಗೆಲ್ಲುವೆ 
ಮಳೆಯಲ್ಲಿ ನೆನೆದು 
ಮೌನರಾಗ  ಹಾಡಿಬಿಡುವೆ 

ಮನದರಸಿ ನಿ ನಿನ್ನ   
ಮನಸ ಕೊಟ್ಟುಬಿಡು 
ಮೈ ಮರೆತು ಹಾರಾಡಿಬಿಡುವೆ 

*ನೋಡು ನಲ್ಲೆ*

 

ಕಣ್ಣು ತೆರೆದು ನೋಡು ನಲ್ಲೆ

ಕಾದು ಕುಳುತಿಹೆ ನಾನಿಲ್ಲೆ .. ಪ

ನಿನ್ನ ಹೃದಯದ ಬಡಿತದಲ್ಲೆ
ನನ್ನ ಮನವು ಮಿಡಿವುದಲ್ಲೆ  .. ಅ  ಪ

ಚಂದ ನಿನ್ನಯ ಮಾತು ಬಲ್ಲೆ
ಮಂದಹಾಸದಿ ನಗೆಯ ಚಲ್ಲೆ
ಅಂದದಾ ಆ ಮುಗೂತಿಯಲ್ಲೆ
ಇಂದಿಗೂ ನೀ ಹೊಳೆವೆಯಲ್ಲೆ .. ೧

ತಂದು ಕೊಡಲೆ  ಹೂವು ಮಲ್ಲೆ
ಸಂಧಿಸಿ ಇಡಲೇ ನಿನ್ನ ಮುಡಿಯಲ್ಲೆ
ಬಂಧಿ ಯಾಗುವೆ ನಾನಲ್ಲೆ
ಗಂಧ ಪರಿಮಳ ನೀನಿರುವಲ್ಲೇ  ... ೨

ಒಂದು ಪ್ರೀತಿಯ ಮಾತಿನಲ್ಲೆ
ಅಂದು ಮಿಂದೆ ಆ ಭಾವದಲ್ಲೆ
ಹಿಂದು ಮುಂದೆ ನನಗ್ಯಾರಿಲ್ಲೆ
ಬಂದು ನೆಲೆಸು ನೀ ಹೃದಯದಲ್ಲೆ ... ೩

:-ಪ್ರಭಂಜನ

*ಯೌವ್ವನ* ( ನನ್ನದೊಂದು ಕಾಫಿಯಾನಾ ಗಝಲ್ )


ನಲ್ಲೆ ನಿನ್ನ ಕಣ್ಣು ನೋಡಲು ಎಷ್ಟು ಚನ್ನ 
ತಲೆಕೂದಲು ಮಿನುಗುತಿದೆ ಹಚ್ಚಿದಾಗ ಕಪ್ಪು ಬಣ್ಣ

ಹೋಲುಕೆ ದಾಳಿಂಬೆಯಂತೆ ದಂತ ನೀ ನಾಕ್ಕಾಗ ಚಿನ್ನ
ನಲಿಯುತಿದೆ ಬಳ್ಳಿಯಂದದಿ ನಿನ್ನ ನಡು ಎಷ್ಟು ಸಣ್ಣ 

ಪಡ್ಡೆ ಹುಡುಗರು ಬಿದ್ದರು ನೋಡುತ ನಿನ್ನ ಮುಖವನ್ನ  
ಲತೆಯಂತೆ ಬಳಕುತ ನೆಡೆವೆ ಬೆಕ್ಕೆ ನಾಚಬೇಕಿನ್ನ 


ಹಾರುತಿಹರು ಮುದುಕರೂ ಕದಿಯಲು ನಿನ್ನ ಮನಸನ್ನ 
ಪ್ರೀತಿಯ ಸುಧೆ ಹರಿಸಿಬಿಡು ಹಂಚಿ ಹನಿ ಹನಿ ಖುಷಿಯನ್ನ    

ನೆಡೆವಾಗ ಕತ್ತೆತ್ತಿ  ಆಗಸದಿ ನೋಡುವೆ ಏನನ್ನ 
ಹಾಡೊಂದ ಹಾಡುತ ಕರೆದುಬಿಡು ಪ್ರಭಂಜನನನ್ನ 

*ಕೋಕಿಲ* ಗಝಲ್..


ಪಂಚಮ ಸ್ವರದಲ್ಲಿ  ಹಾಡು ಹಾಡುವೆ ಏಕೆ 
ಮಾವಿನ ಚಿಗುರು ಅದು ಒಗರಿರಲು ಸಾಕೆ 
 

ಎಲೆಗಳೊಳಗೆ ಇರುವೆ ಅದೆಂಥ ನಾಚಿಕೆ ನಿನಗೆ 

ನಿನ್ನನಾದರಿಸಿದರೂ ಕಣ್ಣು ಕೆಂಪಾಗಿರುವುದೇಕೆ 

ಬಣ್ಣ ಕಪ್ಪಾದರು ತತ್ತಿ ಬೆಳಿ ಗಾತ್ರ ಒಂದೇ 
ಪರರ ಗೂಡಲ್ಲಿ ಇಡುವೆ ಈ ಮೋಸವೇಕೆ  

ಪರಪುಟ್ಟನಾದರೂ ತಾಯಿ ಹುಡುಕುವೆ ಹೇಗೆ 
ಕಾ ಕಾ ಕಲಿಯದೆ ಕುಹೂ ಕುಹೂ ಕೂಗುವೆಯೇಕೆ 

ಕಾವುಕೊಟ್ಟರು ಕಾಗೆಗೆ ಹುಡುಕಿ ಕುಕ್ಕುವೆಯೇಕೆ 
ಸಾಕು ನ್ಯಾಯಕ್ಕಾಗಿ 'ಪ್ರಮು'ಖಗೆ ಒಪ್ಪಿಸಬೇಕೇ    

-ಪ್ರಭಂಜನ. 

ಪಂಚಮಿ

 

ಪಂಚಮಿ 


ಬನ್ನಿರೇ ಭಾಮೆಂಗಳೆಲ್ಲಾ 
ತನಿ ಎರೆಯುವ ನಾಗರಾಜಗೆ
ಹೊನ್ನ ಒಡವೆಯ ಹಾಕಿಕೊಂಡು
ಚನ್ನಾಗಿ ಶೃಂಗರಿಸಿ ಕೊಳ್ಳುತಾ  

ಅರಿಶಿನ ಕುಂಕುಮ ಹಣ್ಣು ಹೂವು
ಕರದಿ ವೈಯಾರದಿ ನೆಡೆಯುತಾ
ಹುರಿದ ಕಡಲೆ ತಂಬಿಟ್ಟು ಚಿಗುಳಿ
ತೆರೆದು ನೈವೇದ್ಯ ಮಾಡುತಾ

ಪನ್ನಗನನ್ನು ಪ್ರಸನ್ನಗೊಳಿಸಿ
ಕನ್ನೆಯರು ವರಗಳ ಕೇಳುತಾ
ಬೆನ್ನಹುರಿಗೆ ಹಾಲ ಹಚ್ಚುತಾ
ಅಣ್ಣ ತಮ್ಮಗೆ ಆಯಸ್ಸು ಬೇಡುತಾ 

 
-ಪ್ರಭಂಜನ. 

ತಿಂಡಿ ಕವನ

 ಇಡ್ಲಿಯಾದರೇನು ಶಿವ 
ವಡೆಯಾದರೇನು ಶಿವ 

ಪುರಿ ಸಾಗುವು ರುಚಿಯೇ ಶಿವ 
ತಿಂದಮೇಲೆ ಎಲ್ಲಾ ಶಿವಮಯ 

ಮಸಾಲೆ ದೋಸೆಗೆ ಬೆಣ್ಣೆಯನ್ನೇ ಸವರಿ 
ಕೊಬ್ರಿ ಚಟ್ನಿಯ ಜೊತೆ ತಿಂದರೆ, ಬಾಯಲ್ಲಿ 
ನೀರೂರಿ ಮನಸು ಅರಳದೇ 

ಬಿಸಿ ಬಿಸಿ ಬೋಂಡವನ್ನು ಸಾಂಬಾರಿನಲ್ಲಿ ಅದ್ದಿ 
ಸಂಬಾರ ಹೀರುತಾ ತಿಂದರೆ ಖುಷಿಯಲ್ಲಿ 
ಸ್ವರ್ಗವೇ ಧರೆಗೆ ಇಳಿಯದೇ 

ಉಪ್ಪಿಟ್ಟು ಕೇಸರಿಭಾತು ಚಿತ್ರಾನ್ನವೇ ಇರಲು 
ತಿಂಡಿ ಹೊಟ್ಟೆ ತುಂಬದೇ ಇರುವುದೇ ನಮ್ಮಲ್ಲಿ 
ನಾಲಿಗೆ ರುಚಿಗೆ ಏನು ಸಾಟಿಯೇ 

ಕಾಫಿ ಟೀ ಜೊತೆಯಿರಲು, ಬಿಸಿ ನಾಲಿಗೆ ಸುಡಲು 
ಹರಟಲು ಜೊತೆ ಗೆಳೆಯರಿರಲು, ಅಲ್ಲಲ್ಲಿ 
ಹೃದಯ ನಿತ್ಯ ಕುಣಿಯದೇ, 
ನಮ್ಮ ತಿಂಡಿಗೆ ಮಾರು ಹೋಗದವರು ಸಿಗುವರೇ 

-ಪ್ರಭಂಜನ. 

ನಮ್ಮದು ಒಂದು ತೊಗೊಳ್ಳಿ :) ತಿಂಡಿ ಕವನ 

ತ್ಯಾಗ ಅಮರವೇ ಪ್ರೀತಿಲಿ

 *ಚಂದದ ಬೆಡಗಿ* *ಈ ಹುಡುಗಿ*

ನಿನ್ನ ನೋಟವೇನು
ಕೆನೆಹಾಲಿನ ಮೈ ಮಾಟವೇನು
ತುಟಿಯ ಮೇಲೆ ಜೇನು
ನೋಡಿದರೆ, ಹೃದಯ ಮಿಟದೇನು

ನಗುವು ಸೊಗಸು ಸುಂದರಿ
ಆಕರ್ಶಿಸುವೆ ಯಾಕೆ ಈ ಪರಿ
ವರುಷಗಳು ಕಳೆದುಹೋದರೂ
ನಿನ್ನೊಲವು ಈಗಲೂ ಮಾದರಿ

ಬೆಡಗಿ ಕೇಶರಾಶಿಯೊಳಗೂ
ಮಿಂಚಿದೆ ನಿನ್ನ ಮೊಗದ ಚೆಲುವು
ಹುಡುಗಿ ಕೆನ್ನೆ ಕೆನ್ನೆ ಯೊಳಗೂ
ಬೆಣ್ಣೆ ಬೆಣ್ಣೆ ಕೊಡಲೇ ಕಾವು

ಚೆಲುವು ಎಷ್ಟು ಹೊಗಳಲಿ
ಪದಗಳೇ ಇಲ್ಲ ನನ್ನಾ ಬಳಿ
ಸ್ನೇಹ ನಿತ್ಯ ನೂತನವಾಗಲಿ
ತ್ಯಾಗ ಅಮರವೇ  ಪ್ರೀತಿಲಿ

-ಪ್ರಭಂಜನ

ನನ್ನ ಒಲವೇ

 ಕನಸೊಂದು ಬಿದ್ದಿತ್ತು
ಹೂವೊಂದು ನಗುತಿತ್ತು
ವರ್ಣಿಸಲಿ ಹೇಗೆ ನಿನ್ನ ಚಲುವೆ


ತಂಗಾಳಿ ಬಿಸಿತ್ತು
ಮೋಡಗಳು ತೇಲುತಿತ್ತು
ಚಂದಿರನಂತೆ ಬಂದೆ ನನ್ನ ಒಲವೇ

ಮುಂಗುರುಳು ಬಾಗಿತ್ತು
ಕೆಂದುಟಿ  ಮಿಂಚುತಿತ್ತು
ದಾಳಿಂಬೆಯಂತೆ ದಂತ ನಿನ್ನ ನಗುವೇ

ಕಣ್ಣು ಹೊಳೆಯುತ್ತಿತ್ತು
ನಡು ಸಣ್ಣ ಬಳುಕುತಿತ್ತು
ಬಳ್ಳಿಯಂತೆ  ನೀ ನನ್ನ ನವಿಲೇ

ಮೆತ್ತನೆಯ ಪಾದವಿತ್ತು
ಹೆಜ್ಜೆ ಮೇಲೆ ಹೆಜ್ಜೆ ಇತ್ತು
ಜಿಂಕೆಯಂತೆ ನಾಚಿ ನಿನ್ನ ನಡುಗೆ

ಸಾವಿರದ ಕನಸಿತ್ತು
ಹೃದಯ ಕುಣಿಯುತಲಿತ್ತು
ಪ್ರೀತಿತುಂಬಿ ಬಂದೆ ನೀ ನನ್ನ ಕಡೆಗೆ

-ಪ್ರಭಂಜನ.

ಕಣ್ಣಲಿ ಏನೋ ಮಿನುಗಿದಹಾಗೆ

 ಕಣ್ಣಲಿ ಏನೋ ಮಿನುಗಿದಹಾಗೆ
ತಾರೆಯೇ ಧರೆಗೆ ಇಳಿದಂತಿದೆ

ಮೊಗದಲಿ ಪೂರ್ಣಚಂದಿರನಾ ಕಂಡೆ
ಆ ನಗುವಲಿ ಏನೋ ಸೆಳೆತವಿದೆ

ಪ್ರೀತಿಯ ನುಡಿಯೇ ಮಧುರವಾಗಿ
ದುಂಬಿಯು ಹಾಡಿದಂತೆ ಕೇಳುತಿದೆ
ಹೆಜ್ಜೆಯ ಮೇಲೆ ಹೆಜ್ಜೆಯನಿಡುವ
ಮೃದು ಪಾದಗಳ ಸೊಬಗ ವರ್ಣಿಸಲೇ

ತರು ಲತೆ ಯಂತೆ ಬಳಕುವೆ ನಿನ್ನ
ಗಾಳಿಯು ಸೋಕಿ ನಾ ನಲಿದಾಡಿದೆ
ನವಿಲಿನ ಹಾಗೆ ನೆಡೆಯುವೆ ನಿನ್ನ
ನಡುಗೆಗೆ ಹೋಲಿಕೆ ಬೇರೇನಿದೆ

ಮನಸಿನ ತುಂಬಾ ಅವರಿಸಿರುವೆ
ನಿನ್ನ ನೋಡದೆ ಹೇಗೆ ಜೀವಿಸಲೇ
ಸಾಗರದಂಚಲಿ ಕಾಯುವೆ ನಾನು
ಚಂದಿರನಂತೆ ಬಾ ನನ್ನೊಲವೆ

*ಮೊದಲ ಧ್ವನಿ*


ಪುಟ್ಟ ಪುಟ್ಟ ಮಾತು
ಗಿಳಿಯಂತೆ ಸೊಗಸು
ನಿನ್ನಾ ಧ್ವನಿ

ಗೆರೆಬಿಚ್ಚಿ ನಲಿವ
ಗುಬ್ಬಚ್ಚಿಯಂತೆ ಕುಚಿಕು
ನಿನ್ನಾ ಧ್ವನಿ

ಕೋಗಿಲೆ ಕೂಗಿ
ಹಾಡಿದಂತೆ ನುಡಿಯು
ನಿನ್ನ ಧ್ವನಿ

ಒಲವ ಸುಧೆಯ
ಸೊಗಸಂತೆ ಮಧುರ
ನಿನ್ನಾ ಧ್ವನಿ

ಪ್ರೀತಿಯ ನಗುವಿನ
ಮುತ್ತುದುರಿದಂತೆ
ನಿನ್ನಾ ಧ್ವನಿ

ಮೊದಲ ತೊದಲ
ನೋಡಿಯಲ್ಲೇ ನಿನಾದ
ನಿನ್ನಾ ದ್ವನಿ

ಆ ಧ್ವನಿ ಕೇಳಲು
ಕಾಯುತಿದೆ ಕೊಳಲು
ನುಡಿಸಲು ಇನಿದನಿ

-ಪ್ರಭಂಜನ.

ನಿನ್ನೊಳಗೆ

ನಿನ್ನೊಳಗೆ ಒಳಗೆ
ಹುದುಗಿರುವ ಎದೆಗೆ
ನಾ ಬಿಡದೆ ಬಿಡಲೇ
ಹೂ ಬಾಣ

ನಿನ್ಮನಸಿನೊಳಗೆ
ಹೊಸ ಭಾವ ಬೆಸೆದು
ನಾ ಮಾಡಿಬಿಡುವೆ
ಹೊಸ ತಾಣ

ನಿನ್ನ ನೋಡು ನೋಡುತಲೇ
ಪ್ರೀತಿ ಗರಿ ಚಿಗುರಿ
ಗೀಚಿ ಬಿಡುವೆ
ಪ್ರಣಯ ಕವನ

ನಿನ್ನ ಪ್ರೀತಿ ರಾಗಕೆ
ಮೋಹ ಪಾಶಕೆ
ಸಿಲುಕಿ ಸವಿವೆ
ಮಧು ಪಾನ

ನಿನ್ನ ಸನಿಹ ಬಯಸುತಾ
ಹಾತೊರೆದು ಬರುವೆ
ಆವರಿಸು ಕೊಟ್ಟು
ಹೃದಯದಲಿ ಸ್ಥಾನ

ನಿನ್ನ ಜನುಮ ಜನುಮದಲಿ
ಪ್ರೀತಿ ಮಾಡುವೆ
ದಾಖಲೆ ಯಾಗಲಿ
ನಮ್ಮೀ ಪಯಣ

-ಪ್ರಭಂಜನ

ಕಾಯಲಾರೆ.


ಕಾಯಲಾರೆ ನೋಡಲಾರದೆ
ಬಾರೆ ಬೇಗ ಕಾರಣ ಹೇಳದೆ  ../ಪ/.
ಪ್ರೀತಿಯಲ್ಲಿ ಸಮಯ ಹೋಗದೆ
ಕಾಯುವುದರಲ್ಲಿ ಏನೋ ಸುಖವಿದೆ.. ../ಅ ಪ,/.

 ಚಂದಿರನೇ ನೋಡಿದ್ಯಾ ನನ್ನವಳ
ಹೇಳಿಬಿಡು ಕಾಯುತಿದೆ ಈ ಹೃದಯಾ
ಪ್ರೀತಿ ಕಿಚ್ಚ ಹಚ್ಚಿ ಹೋದೆ
ಹುಡುಕುತಿರುವೆ ಎಲ್ಲಿರುವೆ 1

 ಮಾಘಿಯಾ ಚಳಿಯಲ್ಲಿ
ಕೊಡು ನೀ ಅಪ್ಪುಗೆಯಾ
ಅದಕಾಗಿ ಏರಿ ಬಡಿಯುತಿದೆ
ಈ ಹೃದಯಾ
ತಂಗಾಳಿಯಲ್ಲಿ ನೀನು ಬಂದು
ಒಂದು ಮಾತು ಹೇಳದೆ ಹೋದೆ 2

ಇರುಳಲ್ಲಿ ಪ್ರೇಮನಿವೇದನೆ
ನೀ ಒಪ್ಪುವಿಯಾ
ಬೆರೆತುಹೋಗಿದೆ ಅರಿಯೆಯಾ ಈ ಹೃದಯಾ
ಕನಸಿನಲ್ಲೂ ಕಂಡಂತೆ
ನನಸಿನಲ್ಲೂ ಬಂದು ಸೇರು 3

--ಪ್ರಭಂಜನ

ಶನಿವಾರ, ಜೂನ್ 15, 2024

ತಾಯೆ ನಿನ್ನ ಮಡಿಲಲಿ ಬಂದು

ತಾಯೆ ನಿನ್ನ ಮಡಿಲಲಿ ಬಂದು
ಪ್ರಕೃತಿಯ ಕಂಡು
ಮಗುವೇ ಆದೆ ನಾ 


ಬ್ರಹ್ಮಗಿರಿ ಕಾವೇರಿಯನೆ  ಕಂಡು 
ಮಂಜಿನಲಿ ಮಿಂದು 
ಧನ್ಯನಾದೆ ನಾ 

ಜೀವನದಿಯಾಗಿ ಹರಿವಳು ನೀನು 
ಹಸಿರಿನ ಉಸಿರು ನೀನು 
ರೈತರ ಮೊಗದಿ ನಗುವನು ತರಿಸಿ 
ದಿನವೂ ಸಾಕುವವಳು ನೀನು 

ಗಿಡಮರ ಜೀವ ಸಂಕುಲಕೆಲ್ಲಾ 
ನೀರುಣಿಸುವೆಯಲ್ಲಾ 
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

ತಾಯೆ ನಿನ್ನ ಮಡಿಲಲಿ ಬಂದು 
ಪ್ರಕೃತಿಯ ಕಂಡು
ಮಗುವೇ ಆದೆ ನಾ 
 
ಹಸಿರ ಸೀರೆ ಉಡಿಸಿ ಭುವಿಗೆ 
ಬಳೆಯ ತೊಡಿಸುವೆ ನೀನು 
ಆರತಿ ಎತ್ತಿ ಇಳಿಯನು ತೆಗೆದು 
ಸೀಮಂತ ಮಾಡಿ ನಲಿವೆಯೇನು 

ಹುತ್ತರಿ ಹಬ್ಬವನೇ ಮಾಡಿ 
ನಗುವ ಮಕ್ಕಳ ನೋಡುವೆ  
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

ತಾಯೆ ನಿನ್ನ ಮಡಿಲಲಿ ಬಂದು 
ಪ್ರಕೃತಿಯ ಕಂಡು
ಮಗುವೇ ಆದೆ ನಾ 

ನಿನ್ನಂಥ ತಾಯಿ ಇರುವ ವರೆಗೆ 
ಇಲ್ಲಿ ಯಾವ ಚಿಂತೆಯೂ ಇಲ್ಲ
ಉಸಿರಿರೋವರೆಗೂ ನಿಂತಮೇಲೆಯೂ  
ನಿನ್ನ ಮಡಿಲೇ ನಮಗೆಲ್ಲ 

ಮಕ್ಕಳ ಸಾಧನೆಯ ನೋಡಿ 
ಮುಕ್ತಿ ನೀನು ಕೊಡಿಸುವೆ 
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

*ಮೈಸೂರ್ ಪಾಕ್*


ತುಪ್ಪದಲ್ಲಿ ಹುರಿದು 
ಸಕ್ಕರೆ ಪಾಕದಲ್ಲಿ ಸೇರಿಸಿ 
ಸಣ್ಣ ಉರಿಯಲ್ಲಿ ಕುದಿಸಿ 
ತೆಗೆದರೆ ಮೈಸೂರ್ ಪಾಕ್ 

ಆಯತಾಕಾರದಲ್ಲಿ ಇದ್ದರೆ 
ನೀ ಕಲ್ಲಾಗಬಹುದೆಂದು 
ಹೃದಯದಾಕಾರ ಕೊಟ್ಟು 
ನಿನ್ನ ಮೃದುವಾಗಿಸಿಹರು 

ಆಕಾರವೇನೇ ಇರಲಿ 
ಮಾಡುವವರು ಸಿಹಿಯಾಗಿದ್ದರಾಯ್ತು  
ಜೊತೆ ಜೊತೆಯಾಗಿ ಕುಳಿತು  
ಸವಿದರೆ ಬಾಯಲ್ಲಿ ನೀರೂರಬೇಕು  

*ನೀಲಿಕನ್ನಿಕೆ*


ನಿನ್ನ ಕಂಗಳ 
ನೋಟ ನೋಡುತ 
ರವಿಯು ಅವಿತನು ಮೋಡದಿ 

ಬುವಿಯಲೆಲ್ಲಾ 
ನಿನ್ನದೇ ಪ್ರಭೆ 
ಕವಿಯು ಹಿಡಿದನು ಕವಿತೆಲಿ 

ನೀಳವೇಣಿಯೇ 
ನೀಲಿಮಣಿಯದು  
ಮಿನುಗುತಿದೆ ಬೈತಲೆಯಲಿ 

ನೀಲಿ ಹಾರವು 
ನಗುತ ಹೊಳೆದಿದೆ    
ತುಟಿಗೆ ಕಂಪನು ಕೊಡುತಲಿ 

ನೀಲಿ ರವಿಕೆಯು 
ನೀಲಿ ಸೀರೆಯು 
ನವಿಲ ಹೋಲಿಕೆ ನಡುವಲಿ 

ನೀಲಿಯಾಯಿತು 
ಭೂಲೋಕವೆಲ್ಲಾ 
ನೀಲಿ ಕಂಗಳ ಚಲುವಲಿ

ನೀಲಿ ನೋಟಕೆ 
ನೀಳವಾಯಿತು 
ಮನಸು ಹುದಗಿತು ನಿನ್ನಲಿ 

ನಾಗಲೋಕದ 
ನೀಲಿಕನ್ನಿಕೆ 
ನಾ ಸಿಂಧೂರವಿಡಲೇ ಹಣೆಯಲಿ 

ಮಂಗಳವಾರ, ಫೆಬ್ರವರಿ 13, 2024

ಜಡೆ

 ಹೂವು ಹಾವಾಗದಿರಲಿ 

ಹಾವು ಜೆಡೆಯಾಗದಿರಲಿ 

ಹೂವು ಜಡೆಯಲ್ಲಿ ಮುಡಿದವರು 

ಬುಸುಗುಟ್ಟದೆ ಇರಲಿ 

ಬುಸುಗುಟ್ಟಿದರೂ ಸರಿ 

ಎಂದೂ ಹೆಡೆ ಬಿಚ್ಚಿ ಹೊಡೆಯದಿರಲಿ

ನನ್ನ ಹೆಂಡತಿಯ ಕೂದಲೂ 

ಕಪ್ಪು ದಪ್ಪ 

ಜಡೆ ಇತ್ತು ಮಾರುದ್ದ 


ಈಗಲೂ ಇದೆ ಕೂದಲು 

ಹೂಬಿಟ್ಟ ಕೊತ್ತಂಬರಿ ಕಟ್ಟು 

ಜಡೆ ಮಾತೇ ಇಲ್ಲ 

ಆನೆಯ ಬಾಲದ ತುದಿಯುದ್ದ 😂😂😂

ಅಯೋಧ್ಯಾ ಪುರಿಗೆ ಹೋಗೋಣ

ಬನ್ನಿ ಗೆಳೆಯರೆಲ್ಲ ನಾವು
ಅಯೋಧ್ಯಾ ಪುರಿಗೆ ಹೋಗೋಣ
ಬಾಲ ರಾಮನನ್ನು ನೋಡಿ
ಬಂದ ಭಕ್ತರ ದರ್ಶನ ಮಾಡೋಣ

ರಾಮನೇನು ಹೊಸಬನಲ್ಲ
ನನ್ನ ಹಾಗೆ ದೇವನು
ಹಾಲು ಮೊಸರು ಬೆಣ್ಣೆ ತಿನ್ನದೇ
ಬಾಲ ಲೀಲೆ ತೋರಿದ ಮಹಿಮನು

ಸುಳ್ಳು ನನಗೆ ಸಾರಾಗ
ಅವನು ಸತ್ಯ ನಿಷ್ಠನು
ಕೊಟ್ಟು ಮಾತು ಮರೆಸುವೆ ನಾನು
ಅವ ರಾಮ ಪಿತೃವಾಕ್ಯ ಪರಿಪಾಲಕನು

ರಾಧೆ ಗೋಪಿಯರು ನನ್ನ
ಹುಡುಕಿ ಹುಡುಕಿ ಕಾದರೂ
ರಾಮನಾದರೂ ಸೀತೆಗಾಗಿ
ಭಾರತ ಖಂಡ ಪೂರ್ತಿ ನೆಡೆದನು 

ಪುತನಿ ಕಾಳಿಂಗ ರಾಕ್ಷಸರು
ನಾ ಇರುವಲ್ಲೇ ಬಂದರು
ರಾಮ ರಾಕ್ಷಸರಾ ಕೊಲ್ಲಲು
ಅವರಿರಿವಲ್ಲೇ ಹೋದನು

ದುಷ್ಟ ಶಿಕ್ಷೆ ಶಿಷ್ಟ ರಕ್ಷೆ
ರಾಮ ಕೃಷ್ಣರ ಅವತಾರವು
ಹಿಂದೂ ಸನಾತನ ಧರ್ಮದಿ
ನಿತ್ಯ ಬೆಳಗಲಿ ಭಾರತವು 

ಪ್ರಭಂಜನ ಮುತ್ತಿಗಿ

ಇಂಗ್ಲಿಷ್ ಹೊಸ ವರ್ಷ

ಇಂಗ್ಲಿಷ್ ಹೊಸ ವರ್ಷದಲ್ಲಿ
ಬಾರುಗಳದ್ದೆ ದರ್ಬಾರು
ಮತ್ತಿನಲ್ಲಿ ತೇಲುವ ಈ ಜನಕ್ಕೆ 
ಬುದ್ದಿ ಹೇಳುವರಾರು

ಯುಗಾದಿಗೆ ಪ್ರಕೃತಿಯಲ್ಲೂ
ಕಾಣಿವುದು ಹೊಸ ಚಿಗುರು
ನಮ್ಮಂತೆ ಹೊಸ ವರ್ಷಾಚಾರಣೆ
ಪ್ರಾಣಿ ಪಕ್ಷಿಗಳಲ್ಲೂ ಜೋರು

ದೀಪ ಆರಿಸಿ ಕೆಕ್ ಕಟ್ ಮಾಡಿ
ಪಟಾಕಿ ಸಿಡಿಸಿ ಮರೆಯುತ್ತಿದ್ದೇವೆ ನಮ್ಮ ಬೇರು

ಯುಗಾದಿ ಹಬ್ಬಕೆ ದೀಪ ಹಚ್ಚಿ
ಉಳಿಸಿವ ಸಂಸ್ಕೃತಿ ನಾವೆಲ್ಲರು

ಹೊಸವರ್ಷಕೆ ಬೇವು ಬೆಲ್ಲ ಹಂಚಿ 

ಯುಗಾದಿ ಸಂಭ್ರಮಿಸೋಣ  ನಾವೆಲ್ಲರೂ 🙏🏼