ಶುಕ್ರವಾರ, ಮಾರ್ಚ್ 25, 2016

ಹಂಚಿಕೊಳ್ಳುವುದಕ್ಕೆ

ಯಾರದೇನು ಭಯವಿಲ್ಲ 
ನಿನ್ನ ಪ್ರೀತಿಸುವುದಕ್ಕೆ 
ಯಾರ ಅಪ್ಪಣೆಯೂ ಬೇಕಿಲ್ಲ 
ನಿನ್ನ ಹೊಗಳುವುದಕ್ಕೆ 
ಬಾಯಾರಲೇಬೆಕಿಲ್ಲ ನಿನ್ನನು 
ನನ್ನೊಳು ಇಳಿಸುವುದಕ್ಕೆ 

ನೀ ಇಲ್ಲದೆ ನಾನಿಲ್ಲ ಎಂದು 
ಎಂದೂ ಭಾವಿಸಿಯೇ ಇಲ್ಲ 
ನೀ ಸಿಗುವೆ ಚಿತ್ರ ವಿಚಿತ್ರದೊಳು 
ಭುವಿ ಆಗಸ  ಸುರಾ ಲೋಕದೊಳು 
ಭಾವನೆಗೆ ತುಸು ಬೆರಗಾಗಿ ನಿಂತು 
ಕಾಮನೆಗೆ ಮೂರ್ತತೆ ಕೊಡುವುದಕ್ಕೆ   

ನೀನೋಬ್ಬಳು ಇದ್ದು ಬಿಡು ಸಾಕು 
ಕಂಡ ಕನಸು ನನಸಾಗುವುದಕ್ಕೆ 
ಅರಿದು ಕುಡಿದು ಮತ್ತೇರಿಸಿಕೊಂಡು  
ಪದಗಳ ಜೊತೆ ತೇಲಾಡುವುದಕ್ಕೆ 
ಬರೆದು ಕುಣಿದು ಎದೆ ಏರಿಸಿಕೊಂಡು 
ಹಗಲಿರುಳು ತಬ್ಬಿ ಮುತ್ತಿಡುವುದಕ್ಕೆ 


ನೀನಿರುವೆ ಕವಿಯ ಹೃದಯದೊಳು 
ಆಗಾಗ ಜಾರುವೆ ಈ ಕೈಬೆರಳೊಳು
'ಕನ್ನಡ'  ಪದಗಳ ಜೊತ ಆಟವಾಡಿ  
ಆರ್ತನಾಗಿ ನಿನ್ನ ಆರಾಧಿಸುವುದಕ್ಕೆ 
ನನ್ನ  ನೀ ಹುಚ್ಚನೆಂದರು ಪರವಾಗಿಲ್ಲ 
ಎಲ್ಲರ ಜೊತೆ ದಿನವೂ ಹಂಚಿಕೊಳ್ಳುವುದಕ್ಕೆ
-- ಪ್ರಭಂಜನ :   (ಇಂದು ರಚಿಸಿದ 'ವಿಶ್ವ ಕವಿ ದಿನದ' ವಿಶೇಷ )

ಗುರುವಾರ, ಮಾರ್ಚ್ 17, 2016

ತಾಳ್ಮೆಇರಲಿ

ನೋಡು ಮಗು ಇಲ್ಲಿ ನೋಡು 
ತಿಳಿ  ಹೇಳುತಿದೆ ಸುತ್ತ ಪ್ರಕೃತಿ 

ಏರುವ ಅಲೆಗಳ ಜೊತೆಯಲಿ 
ಉರಿದು ಬೊಬ್ಬಿರಿದರೂ ಇರುಳಲಿ 
ಪ್ರಶಾಂತವಾಗಿದೆ ಕಡಲ ಒಡಲು 

ಗಾಳಿಯ ಸೇಳತಕ್ಕೆ ಹೆದರುತಲಿ 
ದೋಣಿ ನಡೆಸಿದರೂ ಇರುಳಲಿ 
ಮೌನವಾಗಿದೆ ಚಲಿಸದಂತೆ ನಿಂತು 
  
ಗುಡುಗು ಸಿಡಿಲು ಭೊರ್ಗರೆಯುತಲಿ 
ಮಳೆ ಅರ್ಭಟಿಸಿದರೂ ಇರುಳಲಿ  
ನಿರ್ಮಲವಾಗಿದೆ ತಿಳಿನೀಲಿ ಬಾನು 

ಮನಸು ಕಡಲು ಕಡೆದಂತೆ 
ಕನಸುಗಳು ತೇಲುವ ದೂಣಿಯಂತೆ 
ಕಷ್ಟಗಳು ಮಳೆ ಮೋಡದಂತೆ 

ಎಲ್ಲವೂ ಬಂದು ಹೋಗುವವು  ತಾಳ್ಮೆಇರಲಿ  
ಎಲ್ಲಕ್ಕೂ ಕೊನೆಯುಂಟು!  ಶಾಂತಿಇರಲಿ!