ಮಂಗಳವಾರ, ಫೆಬ್ರವರಿ 13, 2024

ಜಡೆ

 ಹೂವು ಹಾವಾಗದಿರಲಿ 

ಹಾವು ಜೆಡೆಯಾಗದಿರಲಿ 

ಹೂವು ಜಡೆಯಲ್ಲಿ ಮುಡಿದವರು 

ಬುಸುಗುಟ್ಟದೆ ಇರಲಿ 

ಬುಸುಗುಟ್ಟಿದರೂ ಸರಿ 

ಎಂದೂ ಹೆಡೆ ಬಿಚ್ಚಿ ಹೊಡೆಯದಿರಲಿ

ನನ್ನ ಹೆಂಡತಿಯ ಕೂದಲೂ 

ಕಪ್ಪು ದಪ್ಪ 

ಜಡೆ ಇತ್ತು ಮಾರುದ್ದ 


ಈಗಲೂ ಇದೆ ಕೂದಲು 

ಹೂಬಿಟ್ಟ ಕೊತ್ತಂಬರಿ ಕಟ್ಟು 

ಜಡೆ ಮಾತೇ ಇಲ್ಲ 

ಆನೆಯ ಬಾಲದ ತುದಿಯುದ್ದ 😂😂😂

ಅಯೋಧ್ಯಾ ಪುರಿಗೆ ಹೋಗೋಣ

ಬನ್ನಿ ಗೆಳೆಯರೆಲ್ಲ ನಾವು
ಅಯೋಧ್ಯಾ ಪುರಿಗೆ ಹೋಗೋಣ
ಬಾಲ ರಾಮನನ್ನು ನೋಡಿ
ಬಂದ ಭಕ್ತರ ದರ್ಶನ ಮಾಡೋಣ

ರಾಮನೇನು ಹೊಸಬನಲ್ಲ
ನನ್ನ ಹಾಗೆ ದೇವನು
ಹಾಲು ಮೊಸರು ಬೆಣ್ಣೆ ತಿನ್ನದೇ
ಬಾಲ ಲೀಲೆ ತೋರಿದ ಮಹಿಮನು

ಸುಳ್ಳು ನನಗೆ ಸಾರಾಗ
ಅವನು ಸತ್ಯ ನಿಷ್ಠನು
ಕೊಟ್ಟು ಮಾತು ಮರೆಸುವೆ ನಾನು
ಅವ ರಾಮ ಪಿತೃವಾಕ್ಯ ಪರಿಪಾಲಕನು

ರಾಧೆ ಗೋಪಿಯರು ನನ್ನ
ಹುಡುಕಿ ಹುಡುಕಿ ಕಾದರೂ
ರಾಮನಾದರೂ ಸೀತೆಗಾಗಿ
ಭಾರತ ಖಂಡ ಪೂರ್ತಿ ನೆಡೆದನು 

ಪುತನಿ ಕಾಳಿಂಗ ರಾಕ್ಷಸರು
ನಾ ಇರುವಲ್ಲೇ ಬಂದರು
ರಾಮ ರಾಕ್ಷಸರಾ ಕೊಲ್ಲಲು
ಅವರಿರಿವಲ್ಲೇ ಹೋದನು

ದುಷ್ಟ ಶಿಕ್ಷೆ ಶಿಷ್ಟ ರಕ್ಷೆ
ರಾಮ ಕೃಷ್ಣರ ಅವತಾರವು
ಹಿಂದೂ ಸನಾತನ ಧರ್ಮದಿ
ನಿತ್ಯ ಬೆಳಗಲಿ ಭಾರತವು 

ಪ್ರಭಂಜನ ಮುತ್ತಿಗಿ

ಇಂಗ್ಲಿಷ್ ಹೊಸ ವರ್ಷ

ಇಂಗ್ಲಿಷ್ ಹೊಸ ವರ್ಷದಲ್ಲಿ
ಬಾರುಗಳದ್ದೆ ದರ್ಬಾರು
ಮತ್ತಿನಲ್ಲಿ ತೇಲುವ ಈ ಜನಕ್ಕೆ 
ಬುದ್ದಿ ಹೇಳುವರಾರು

ಯುಗಾದಿಗೆ ಪ್ರಕೃತಿಯಲ್ಲೂ
ಕಾಣಿವುದು ಹೊಸ ಚಿಗುರು
ನಮ್ಮಂತೆ ಹೊಸ ವರ್ಷಾಚಾರಣೆ
ಪ್ರಾಣಿ ಪಕ್ಷಿಗಳಲ್ಲೂ ಜೋರು

ದೀಪ ಆರಿಸಿ ಕೆಕ್ ಕಟ್ ಮಾಡಿ
ಪಟಾಕಿ ಸಿಡಿಸಿ ಮರೆಯುತ್ತಿದ್ದೇವೆ ನಮ್ಮ ಬೇರು

ಯುಗಾದಿ ಹಬ್ಬಕೆ ದೀಪ ಹಚ್ಚಿ
ಉಳಿಸಿವ ಸಂಸ್ಕೃತಿ ನಾವೆಲ್ಲರು

ಹೊಸವರ್ಷಕೆ ಬೇವು ಬೆಲ್ಲ ಹಂಚಿ 

ಯುಗಾದಿ ಸಂಭ್ರಮಿಸೋಣ  ನಾವೆಲ್ಲರೂ 🙏🏼


 

ಏನಿದೇನಿದು
ಸೂರ್ಯನುದಯವು
ಭುವಿಯಲಿ ಬಂಗಾರದ ಬಣ್ಣವು

ಮೊಡದೋಳಗಣ
ಮಂಜು ಸರಿಸಿ
ಕೊಡುವೆ ನಿತ್ಯ ಉಲ್ಲಾಸವು

ಜೀವ ಸಂಕುಲಕೆಲ್ಲ
ಚೇತನ ತುಂಬಿದೆ
ನಗುಮೊಗದ ನಿನ್ನ ನೋಟವು 

ಮರದ ಮರೆಯಲಿ
ನಿಂತು ನೀ ಆಡುವೆ
ಕಣ್ಣು ಮುಚ್ಚಾಲೆ ಆಟವು

ಆಟ ನೋಟದ ಮಧ್ಯ
ಸಾರುವೆ ಕಾಯಕವೇ ಕೈಲಾಸವು

ನಿತ್ಯ ಉದಯಿಸಿ ಮುಳುಗಿ ತಿಳಿಸುವೆ
ಇದುವೇ ಜೀವನದ ಪರಿ ಪಾಠವು

:ಪ್ರಭಂಜನ

ನನ್ನೊಳಗೆ ನೀನು

 ನನ್ನೊಳಗೆ ನೀನು
ನಿನ್ನೊಳಗೆ ನಾನು
ಇರುವಾಗ ಮಾಡದು ಊನೇನೇನು

ನನ್ನ ಹೃದಯವನು
ಸೆರೆಹಿಡಿದವನು ನೀನು
ಆಗಲೂ ಮಾಡಲಿಲ್ಲ ಊನೇನೇನು

ನನ್ನ ಮನಸಲ್ಲಿ ನೀನು
ನಿನ್ನ ಕನಸೇ ನಾನು
ಮನಸು ಮನಸು ಬೇರೆತಾಗ ಮಾಡದು ಊನೇನೇನು 

ಬದುಕು

 ನಿನ್ನ ಬದುಕು ನೋಡಿ
ನಾಚಬೇಕು ಬದುಕು
ಬದುಕಿಬಿಡು ಮನುಜ
ರಾಜ ಬದುಕಿದಂತೆ

ಬದುಕಿ, ಬದುಕಲು ಬಿಡು
ನೀ ಬದುಕಿದರೆ ಬದುಕು
ಬದುಕೇ ಬಂದು ಹೊಗಳಬೇಕು
ಬದುಕಿದರೆ ಹೀಗೆ ಬದುಕಬೇಕೆಂದು 

ನಿತ್ಯದಾ ಬದುಕು (ಬದುಕು= ಕೆಲಸ - ಉ ಕರ್ನಾಟಕದಲ್ಲಿ ಪ್ರಯೋಗ ಇದೆ)
ಬದುಕಿಗೆ ದಾರಿಯಾಗಬೇಕು
ಬದುಕು ಮಾಡುತ್ತಲೇ ಇರು
ಬದುಕು ಬೆಳಕಾಗಿ ಬದುಕು ಮುಗಿಯುವವರೆಗೆ

ನೀ ಇರೋವರೆಗೂ

 ನೀ ಇರೋವರೆಗೂ 
 ಭಯವಿಲ್ಲ ನನಗೆ
ನೀ ಇರುವಾಗ
ಗುಂಡಿ ಬೇಕಿಲ್ಲ ಬಟ್ಟೆಗೆ

ಸೀರೆ ಉಡುವಾಗೆಲ್ಲ ನೀನಿರಲೇ ಬೇಕು
ನೀನಿಲ್ಲದೆ ಉಡಲಾರೆ ಆ ಉಡುಪು
ಆಪದ್ಭಾ೦ದವ ಹೋದಕಡೆಯಲ್ಲಾ   
ಅಳುಕಿಲ್ಲದೆ ಉಪಯೊಗಿಸದವರಿಲ್ಲ  - ಪಿನ್ನು 

ಸರ ಸರಿದು ಹೋದರು ಬರುವೆ ನೀನು
ಚಪ್ಪಲಿ ಕಿತ್ತರೂ ಹೇಳುವೆ ನಾನಿಲ್ಲವೇನು
ಚೀಲ ಸಾಮಾನು ಕಾಪಾಡುವೆ ನೀನು
ನಿನಗೆ ಸರಿ ಸಾಟಿ ಯಾರೂ ಇಲ್ಲವೇನೋ    

ನೀ ನಿಜವಾದ ಪಾಠಶಾಲೆ
ಬಾಗುವೆ ಯಾರೇ ಹೇಗೆ ಬಗ್ಗಿಸಿದರುನೂ
ಒಮ್ಮೊಮ್ಮೆ ಚ್ಚುಚಿ ನೋವುಮಾಡುವೆ ನೀನು
ಕ್ಷಮಿಸುವೆ ಉಪಯೋಯೋಗಿಸಿ ಬಿಸಾಡಿದರುನೂ 

-ಪ್ರಭಂಜನ