ಬುಧವಾರ, ಏಪ್ರಿಲ್ 25, 2018

ಬೆಳೆದೆರೆಡು ಹೂವುಗಳು


ತೆಳ್ಳನೆಯ ಚಪ್ಪರದಿ 
ಬಳ್ಳಿಯು ತುದಿಯಲ್ಲಿ 
ಬೆಳ್ಳನೆಯ ಹೂಗಳ  ನೋಡೋ 

ಬಾಳೆಂಬ ತೋಟದಲಿ 
ಬೆಳೆದೆರೆಡು ಹೂವುಗಳು 
ಬಳುಕುತಾ ತಲೆದೂಗಿವೆ ನೋಡೋ 

ಅಂಬರದಿ ಸುವಾಸನೆಗೆ  
ದುಂಬಿಗಳ ಹಾರುತಿವೆ 
ತುಂಬಿದ ಮೊಗವ ನೋಡೋ 

ನೈದಿಲೆಯು ನಾಚಿಕೆಗೆ 
ಬೈತಲೆಯು ಎರಡಾಗಿ 
ಕೈ ಹಿಡಿದ ನಗುವ ನೋಡೋ   

ಬಟ್ಟಲು ಗಣ್ಣನು ಬಿಟ್ಟು 
ಬೆರಗಾಗಿ ಸುತ್ತ ನೋಡುತ್ತಿವೆ   
ಬಳಿಸಾಗಿ ಸೊಬಗ ಸವಿಯಬೇಕು ನಾವು 

ಬುಧವಾರ, ಏಪ್ರಿಲ್ 18, 2018

ಕದ್ದ ಮಡಿಕೆ ತೋರು

ನಂದಗೋಕುಲದಲ್ಲಿ
ಮಿಂದ ನಮ್ಮ ಮಡಕೆಗಳ  
ತಂದು ಜೋಡಿಸಿರುವೆ ನೀ 
ಕಂದನಲ್ಲವೋ  ಕೃಷ್ಣ 

ಬೆಣ್ಣೆ ತುಂಬಿ ತರುತಿದ್ದೆ 
ಹಣ್ಣು ಹಾಲು ತುಂಬುತ್ತಿದ್ದೆ  
ತಣ್ಣನೆಯ ಮೊಸರು ಮಾರುತಿದ್ದೆ 
ಕ್ಷಣದಲ್ಲಿ ಕದ್ದು ತಂದೆ  ಕೃಷ್ಣ  

ಸುಣ್ಣದಿಂದ ಚಿತ್ರ ಬಿಡಿಸಿ 
ಬಣ್ಣ ತುಂಬಿದ ನನ್ನ ಮಡಿಕೆ 
ಕಣ್ಣು ಬಿಟ್ಟು ಹುಡುಕಿದರೂ 
ಸಣ್ಣ ಕುರುಹು ಇಲ್ಲ ಕೃಷ್ಣ 

ಸಭ್ಯನಲ್ಲವೇ ನೀನು   
ಲಭ್ಯವಿದ್ದರೆ ನನ್ನ ಮಡಿಕೆ ತೋರು 
ಅಭ್ಯಂಜನ ಮಾಡಿಸಿ ಬೆಣ್ಣೆ ಕೊಡುವೆ  
ಪ್ರಭಂಜನನಂತೆ ಬಾರೋ ಕೃಷ್ಣ 

ಶ್ರೀ ಶೇಷಾಗಿರಿರಾವ್

ಹೂವ್ವಿನ ಹಡಗಲಿ ವಾಸ
ಶ್ರೀ ಶೇಷಗಿರೀಶ
ಮಲ್ಲಿಗೆ ತೋಟದಲ್ಲಿ
ಮಾನವೀಯತೆಯ ಹೂ ಬೆಳೆದ \\ ಪ \\

ಬರವಣಿಗೆಯ ಮೂಲಕ ಬಡೆದಿಬ್ಬಿಸಿ 
ಜನಜಾಗೃತಿ ಮೂಡಿಸಿದ ಕವೀಶ   
ಬರೆದಂತೆ ನುಡಿದು ನುಡಿದಂತೆ ನೆಡೆದು  
ಮನುಷತ್ವಕ್ಕೆ ಆದರ್ಶಪ್ರಾಯರಾದ  1.

ಅವರವರ ಧರ್ಮ ಆಚರಣೆಗೆ
ಬೆಲೆಕೊಟ್ಟು ಎಲ್ಲರೊಂದಿಗೆ ಬೆರೆತ 
ಬವಣೆಗಳು ಎಷ್ಟೇ ಬಂದರೂ
ಬಿಡದೆ ತನ್ನ ನೈಜ ಧರ್ಮ ಪಾಲಿಸಿದ  2

ಭಾವನೆಗಳಿಗೆ ಬೆಲೆಕೊಟ್ಟು ಬೆಳೆಸಿದ
ಬಾಲ ಕವಿಗಳೆಷ್ಟೋ ನಾನರಿಯೆ
ಬದುಕಿದರೆ ಹೀಗೇ ಬದುಕಬೇನೆಂದು ತೋರಿ
ಬಾರದ ಲೋಕಕ್ಕೆ ಇಷ್ಟುಬೇಗ ಹೋದದ್ದು ಸರಿಯೇ 3