ಶುಕ್ರವಾರ, ಮೇ 18, 2018

ದೊಡ್ದುರ ಸೇರಿದೆವು

ನಮ್ಮೂರ ದಾರಿ ಬಿಟ್ಟು ದೊಡ್ದುರ ಸೇರಿದೆವು
ಬೆಳೆ  ವಣಗಿತು ಮಳೆ ಬರದೇ  ಕಾಡಿ 
ಬಿತ್ತಿ ಬೆಳೆಯುವ ಕೈಗೆ ಅದಿರಿನ  ಬುಟ್ಟಿ ಬಂತು
ಹೊತ್ತು ಸಾಗಿಸಬೇಕಿದೆ ಕನಸ ದೂಡಿ
ಗುಳೆ ಎದ್ದು ಬಂದಿದೀವಿ ಹಸು ಕರು ಹೇಗಿವೆಯೋ
ಚಿಂತೆ ತುಂಬಿದೆ ಮನಸಲ್ಲಿ  ನೋವ ಮೂಡಿ
ಜಾತಿ ಕುಲವೆನ್ನದೆಯೇ ಜೊತೆಯಾಗಿ ನಾವೆಲ್ಲ
ದುಡಿದು ಊರ ಸೇರಬೇಕಾಗಿದೆ ನೋಡಿ 

ಸಂಜೆ ರಾಜಕೀಯ


ಬೆಳಿಗ್ಗೆ ಕಾ-ಕು ಜೋತುಬಿದ್ದು 
ಸಂಜೆ ರಾಜ್ಯಪಾಲರ ಸದ್ದು
ರಾತ್ರಿಪೂರಾ ಕೋರ್ಟು ಎದ್ದು
ಯೆಡ್ಡಿ ಸಹಿತ  ಬಿಜಿಪಿ ಗೆದ್ದು
ಕುರುಡ ಕಾಂಚಾಣ ಕುಣಿಯುತಲಿದ್ದು
ಚುನಾವಣೆ ಬರಬಹುದು ಸರ್ಕಾರ ಬಿದ್ದು
ಮುಂದೆ ಆದ್ರೂ ಒಂದೇ ಪಕ್ಷಕ್ಕೆ ಓಟು ಕೊಟ್ಟು 
ಪೂರ್ತಿ ಬಹುಮತ ಬರೋಹಾಂಗೆ ಗುಂಡಿ  ವತ್ತು
-ಪ್ರಭಂಜನ