ಮಂಗಳವಾರ, ಫೆಬ್ರವರಿ 13, 2024

ಅಯೋಧ್ಯಾ ಪುರಿಗೆ ಹೋಗೋಣ

ಬನ್ನಿ ಗೆಳೆಯರೆಲ್ಲ ನಾವು
ಅಯೋಧ್ಯಾ ಪುರಿಗೆ ಹೋಗೋಣ
ಬಾಲ ರಾಮನನ್ನು ನೋಡಿ
ಬಂದ ಭಕ್ತರ ದರ್ಶನ ಮಾಡೋಣ

ರಾಮನೇನು ಹೊಸಬನಲ್ಲ
ನನ್ನ ಹಾಗೆ ದೇವನು
ಹಾಲು ಮೊಸರು ಬೆಣ್ಣೆ ತಿನ್ನದೇ
ಬಾಲ ಲೀಲೆ ತೋರಿದ ಮಹಿಮನು

ಸುಳ್ಳು ನನಗೆ ಸಾರಾಗ
ಅವನು ಸತ್ಯ ನಿಷ್ಠನು
ಕೊಟ್ಟು ಮಾತು ಮರೆಸುವೆ ನಾನು
ಅವ ರಾಮ ಪಿತೃವಾಕ್ಯ ಪರಿಪಾಲಕನು

ರಾಧೆ ಗೋಪಿಯರು ನನ್ನ
ಹುಡುಕಿ ಹುಡುಕಿ ಕಾದರೂ
ರಾಮನಾದರೂ ಸೀತೆಗಾಗಿ
ಭಾರತ ಖಂಡ ಪೂರ್ತಿ ನೆಡೆದನು 

ಪುತನಿ ಕಾಳಿಂಗ ರಾಕ್ಷಸರು
ನಾ ಇರುವಲ್ಲೇ ಬಂದರು
ರಾಮ ರಾಕ್ಷಸರಾ ಕೊಲ್ಲಲು
ಅವರಿರಿವಲ್ಲೇ ಹೋದನು

ದುಷ್ಟ ಶಿಕ್ಷೆ ಶಿಷ್ಟ ರಕ್ಷೆ
ರಾಮ ಕೃಷ್ಣರ ಅವತಾರವು
ಹಿಂದೂ ಸನಾತನ ಧರ್ಮದಿ
ನಿತ್ಯ ಬೆಳಗಲಿ ಭಾರತವು 

ಪ್ರಭಂಜನ ಮುತ್ತಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ