ಬುಧವಾರ, ಅಕ್ಟೋಬರ್ 6, 2021

ನಂಟು ಕಗ್ಗಂಟು

 *ನಂಟು ಕಗ್ಗಂಟು*


ಮೋಡ ಮುಚ್ಚಿದ ಬಾನಿನಲ್ಲಿ
ಕತ್ತಲೆಯ ಭ್ರಮೆಯ ಹಿಂದೆ
ಸೂರ್ಯನೊಬ್ಬನು ಇದ್ದಾನೆ
ಅವ ಒಬ್ಬನಿದ್ದರೂ ತಾನು
ಪ್ರಪಂಚ ನಿಯಂತ್ರಿಸುತ್ತಾನೆ


ಸೂರ್ಯನಿಲ್ಲದೆ ಚಂದ್ರನಿಲ್ಲ
ಚಂದ್ರನಿಲ್ಲದೆ ಸಾಗರ ಉಕ್ಕುವುದಿಲ್ಲ
ಈ ನಂಟು ಕಗ್ಗಂಟು ಇಂದು ನಿನ್ನೆಯದಲ್ಲ
ಒಂದು ಬಿಟ್ಟು ಮತ್ತೊಂದಿಲ್ಲ ಎಲ್ಲಾ
ಗುರುತ್ವಾಕರ್ಷಣೆ ಯಲ್ಲಿಟ್ಟಿದ್ದಾನೆ.


ಸೂರ್ಯನ ಕಾಂತಿ ನೀ
ಪ್ರತಿಫಲನದ ಚಂದ್ರ ನಾ
ಭೂಮಿ, ಪ್ರಾಣಿ, ಪಕ್ಷಿಗಗಳಿಗೂ
ಬೇಕು ಸೂರ್ಯ ಚಂದ್ರರ ಬೆಳಕು
ಉಳಿದಿದ್ದು ದೇವರು ನೋಡಿಕೊಳ್ಳುತ್ತಾನೆ.