ಗುರುವಾರ, ಫೆಬ್ರವರಿ 13, 2025

ತಿಂಡಿ ಕವನ

 ಇಡ್ಲಿಯಾದರೇನು ಶಿವ 
ವಡೆಯಾದರೇನು ಶಿವ 

ಪುರಿ ಸಾಗುವು ರುಚಿಯೇ ಶಿವ 
ತಿಂದಮೇಲೆ ಎಲ್ಲಾ ಶಿವಮಯ 

ಮಸಾಲೆ ದೋಸೆಗೆ ಬೆಣ್ಣೆಯನ್ನೇ ಸವರಿ 
ಕೊಬ್ರಿ ಚಟ್ನಿಯ ಜೊತೆ ತಿಂದರೆ, ಬಾಯಲ್ಲಿ 
ನೀರೂರಿ ಮನಸು ಅರಳದೇ 

ಬಿಸಿ ಬಿಸಿ ಬೋಂಡವನ್ನು ಸಾಂಬಾರಿನಲ್ಲಿ ಅದ್ದಿ 
ಸಂಬಾರ ಹೀರುತಾ ತಿಂದರೆ ಖುಷಿಯಲ್ಲಿ 
ಸ್ವರ್ಗವೇ ಧರೆಗೆ ಇಳಿಯದೇ 

ಉಪ್ಪಿಟ್ಟು ಕೇಸರಿಭಾತು ಚಿತ್ರಾನ್ನವೇ ಇರಲು 
ತಿಂಡಿ ಹೊಟ್ಟೆ ತುಂಬದೇ ಇರುವುದೇ ನಮ್ಮಲ್ಲಿ 
ನಾಲಿಗೆ ರುಚಿಗೆ ಏನು ಸಾಟಿಯೇ 

ಕಾಫಿ ಟೀ ಜೊತೆಯಿರಲು, ಬಿಸಿ ನಾಲಿಗೆ ಸುಡಲು 
ಹರಟಲು ಜೊತೆ ಗೆಳೆಯರಿರಲು, ಅಲ್ಲಲ್ಲಿ 
ಹೃದಯ ನಿತ್ಯ ಕುಣಿಯದೇ, 
ನಮ್ಮ ತಿಂಡಿಗೆ ಮಾರು ಹೋಗದವರು ಸಿಗುವರೇ 

-ಪ್ರಭಂಜನ. 

ನಮ್ಮದು ಒಂದು ತೊಗೊಳ್ಳಿ :) ತಿಂಡಿ ಕವನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ