ಶುಕ್ರವಾರ, ಮೇ 27, 2011

ಸುರಿಸದಿರು

ಕಣ್ಣೇರು ಸುರಿಸದಿರು
ವರೆಸುತ ಸೆರಗೊಳಗೆ
ನಿಜವನು ಅರಿಯದ
ಇನಿಯ ಮರಗುವನು ಎಂದು

ನೋಡದಿರು ಆಕಾಶ
ಬೀಳದು ಉಲ್ಕಾ ನಕ್ಷತ್ರ
ಜೀವದಾ ಗೆಳೆಯನ
ಮನಸು ಹೊರಲಾಡುತಿದೆ ಎಂದು

ದೂರ ಇರುವ ತವರ
ನೆನೆದು ಕೊರಗದಿರು
ದುಖ ಹಂಚಿಕೊಳಲು
ನನ್ನವರು ಯಾರು ಜೊತೆ ಇಲ್ಲವೆಂದು

ದೂರದಿರು ದೇವರ
ಬದಲಾಗದು ಹಣೆಬರಹ
ಕಂಡು ಕನಸುಗಳೆಲ್ಲ
ನನಸಾಗಲಿಲ್ಲ ವೆಂದು

ಒಪ್ಪಿಕೊ ನಿಜವನ್ನು
ಮಾಡದ ತಪ್ಪನ್ನು ಬಿಟ್ಟು
ಬಿಡದಿರು ಛಲವ
ಸಾಧಿಸು ನೀ ಸರಿ ಎಂದು