ಶನಿವಾರ, ಮಾರ್ಚ್ 29, 2014

ಕಾಯುವೆ

ಉಲ್ಲಾಸ ಗೊಂಡಿತ್ತು ಮನಸು ನಿನ್ನೊಲುಮೆಯಿಂದ 
ಘಾಸಿ ಗೊಳಿಸಿದೆ ನೀನು ಅತಿ ಸಲುಗೆಯಿಂದ 

ನಿನ್ನೊಲವ ಬಯಸಿ ಮಾತಾಡಿದೆ ಮಧುರ ಕನಸಿನಿಂದ 
ಕನಸು ಮುರಿದು ಹೃದಯ ಚೂರಾಯಿತು ನಿನ್ನಿಂದ 

ಮನಸು ಕೊರಗುತಿದೆ ಹಿತವಾದ ನಿನ್ನ ನೆನಪಿಂದ 
ಪಥ್ಯವಾಗದ  ಸತ್ಯ ನೀ ತಿಳಿ  ಒಳಗಣ್ಣಿನಿಂದ 

ಅರಿತು ಬರುವೆ ನನ್ನಲಿ  ನೀನು ಮಾಡಿದ ತಪ್ಪಿನಿಂದ 
ಬರುವುದೆಲ್ಲ ಬರಲಿ ಕಾಯುವೆ ನಿನಗಾಗಿ ಪ್ರೀತಿಯಿಂದ 

ಸುಕೃತಿ

ಯಾವ ಲೋಕದ ಚಲುವೆ ನೀನು 
ಕಣ್ಣ ನೋಟದಲ್ಲೇ ಕೊಲ್ಲುವೇ  
ಸ್ವರ್ಗ ರಾಜನ ಮಗಳೇ ನೀನು 
ಚಿನ್ನ ಮಾತಿನಲ್ಲೇ ಗೆಲ್ಲುವೆ 

ಹೊಳೆಯುವ ಕಂಗಳಿಗೆ ಹರಣಿ ಎಂದು ಹೆಸರಿಡಲೇ  
ಅಳುಕದೆ ಬಳುಕುವೆ  ಜಾನ್ಹವಿ  ಎನ್ನಲೇ 
ತಿಳಿ ಗಗನ ನಿನಗೆ ಅಭಿಜ್ಞ ಎಂದು ಕರೆಯಲೇ 
ಬಿಳಿದಾದ  ತಾವರೆ ಮುಖದವಳೇ !

ಸುಪ್ರಮತಿ ನಿನಗೆ  ಪ್ರಮಿತ ಎಂದು ಹೆಸರಿಡಲೇ 
ಸುಪ್ರೇಮ ಕೊಡುವ ನಿನಗೆ ಸುಪ್ರೀತ ಎನ್ನಲೇ 
ಅಪ್ರತಿಮ ಸುಂದರಿ ಪ್ರಣೀತ ಎಂದು ಕರೆಯಲೇ 
ಅಪ್ರಮೇಯನ ಹೋಲುವ ಮುಖದವಳೇ!

ವಾಯುದೇವನ ರಾಣಿ ಭಾರತಿ ಎಂದು ಹೆಸರಿದಲೇ 
ಲಯ ಕಾರಕನ  ರಾಣಿ ಗೌರಿ ನೀ  ಎನ್ನಲೇ 
ಕಾಯುವ ಗುಣಕ್ಕೆ ಗುಣನಿಧಿ ಎಂದು ಕರೆಯಲೇ
ಛಾಯೇ ಚಂದ್ರನ ಕಾಂತಿ ಇರುವವಳೇ!

ಚಂದ್ರನ  ಮುಖಕೆ  ಚಂದ್ರಿಕಾ ಎಂದು ಹೆಸರಿಡಲೇ 
ಇಂದ್ರನ ಲೋಕದ ನಿನಗೆ ಪಾರಿಜಾತ ಎನ್ನಲೇ 
ಕೃತ್ತಿ  ವಾಸನ ರಾಣಿ ಸುಕೃತಿ ಎಂದು ಕರೆಯಲೇ 
ಚಕ್ರ ಧರನ  ಎದೆಯಲಿ ಇರುವವಳೇ !