ಬುಧವಾರ, ಅಕ್ಟೋಬರ್ 29, 2014

ಹಚ್ಚೋಣ ದೀಪ

ಪ್ರಣತಿ ಎಣ್ಣೆಯ  ಒಡಲು
ಪ್ರೀತಿ ತುಂಬಿದ ಕಡಲು
ಬೆಳಗುತಿರಲಿ ದೀಪ ಹಗಲು ಇರಿಳು 

ದ್ವೇಷ ಅಸೂಯೆ ಬದಲು
ಮನಸ ಕೊಳೆಯನು ತೊಳೆದು
ಬೆಳಗಿಸುವ ಸ್ನೇಹ ಸುರಿಸಿ ಸೊಗಸು 

ಓಡಿಸಿ ಅಜ್ಞಾನದ ಕತ್ತಲು
ಹಚ್ಚೋಣ  ದೀಪ ಸುತ್ತಲು
ಬೆಳಗುರಿತಲಿ ಜ್ಞಾನ ಹರಿಸಿ ಹೊನಲು 

ಭಾನುವಾರ, ಅಕ್ಟೋಬರ್ 19, 2014

ಗಿಳಿಯೇ

ಚಂದದ ಗಿಳಿಯೇ ಬಾರೋ 
ಮುದ್ದಾದ ಹಾಡು ಹಾಡೋ 
ಹಚ್ಚ ಹಸಿರ ರೆಕ್ಕೆ ಬಿಚ್ಚಿ 
ಹೊಸ ಉಲ್ಲಾಸ ತಾರೋ ...
 
ಮಾವಿನ ಮರವ ಹುಡುಕಿ 
ಮಾಗಿದ ಕಾಯಿ ಕಚ್ಚೋ 
ದಾಳಿಂಬೆ ತೋಟಕೆ ನುಗ್ಗಿ 
ಸಿಹಿ ಹಣ್ಣಿಗೆ  ಧಾಳಿ ಮಾಡೋ 

ಹಣ್ಣಿನ ರುಚಿಯನ್ನ ಸವಿದು 
ಉಳಿದ ಗಿಳಿಗಳ ಕರಿಯೋ 
ಚಿಲಿಪಿಲಿ ಗುಟ್ಟುತ ಹಾರಿ 
ಮರಿ ಗಿಳಿಗೆ ಗುಟುಕು ನೀಡೋ 

ಹಸಿರಎಲೆ ಹಿಂದೆ ಕುಳಿತು 
ಕಣ್ಣು ಮುಚ್ಚಾಲೆ ಆಡೋ 
ರೆಂಬೆ ರೆಂಬೆ ಹಾರುತ  
ಮುದ್ದು ಮಾಡುತ ಕೂರೋ 

ಮಂಗಳವಾರ, ಅಕ್ಟೋಬರ್ 14, 2014

ವಸುಧೆ


ಹರನು ಜಡೆ ಸರಸಿ 
ಹರಿಯಬಿಟ್ಟ ಭಾಗಿರಥಿಯೋ 

ಹಸಿರ ಸೀರೆಯನುಟ್ಟು 
ಹಸಿಹಾಲು ಸುರಿಸೋ ಗಂಗೆಯೋ 

ವಸುಧೆಯೋಳಗಿನ 
ರಸಿಕ ಲೋಕದ ಒಡಲೊ 

ಹಸನಾದ ನಿತ್ಯ ಕಾನನದ 
ಹೊಸತಾದ ಝುಳು ಲಹರಿಯೋ 

ಉಸಿರಿಗೆ ಮೋಹ ತರುವ 
ವಸುಗೆಯಾಗದ ಮಾಯಾಂಗನೆಯೊ 

ಪಿಸುಮಾತಿಗೆ ಶರಣಾದ
ಹಸಿರು ತುಂಬಿದ ನವ ವಧುವೋ

ಹಸಿವ ಮರೆಸಿ ಮುದನೀಡುವ 
ಹೊಸರೂಪದ ಮೃಷ್ಟಾನ್ನವೋ 

ಕವಿಗಳಿಗೆ ಸ್ಪೂರ್ತಿ ತುಂಬೋ 
ನವಿರಾದ ಜೀವ ಜಲಪಾತವೋ

ಬಸವಳಿದು ಹೋಗಿರುವೆ ನಾ 
ನುಸುಳದಾಗಿವೆ ಪದಗಳು ಚೆಲುವ ವರ್ಣಿಸಲು !!
(ಚಿತ್ರಕ್ಕಾಗಿ ಬರೆದ ಕವನ )

ಶುಕ್ರವಾರ, ಅಕ್ಟೋಬರ್ 10, 2014

ಬರಗಾಲ


ನಲ್ಲನ ಪ್ರೀತಿಯ ಸಂದೇಶ 
ಬಂದರಾಗಲೇ ವಸಂತಕಾಲ 

ಚಲ್ಲಿ ಅರಳಿದ ಗುಲಾಬಿ ಹೂವು 
ಕಿರುನಗೆಯಬೀರಿದಾಗಲೇ ಮಳೆಗಾಲ  

ನಲ್ಲೆ  ಪ್ರೀತಿ ಕಣ್ಣಲ್ಲಿ ನೋಡಿ ಒಪ್ಪಿ 
ಅಪ್ಪಿಕೊಂಡರಾಗಲೇ ಚಳಿಗಾಲ 

ವಲ್ಲೆ ನಿನ್ನ ಸಹವಾಸ  ಎಂದು  
ಮುನಿಸಿಕೊಂಡಾಗಲೇ ಬೇಸಿಗೆಕಾಲ 

ಬೆಲ್ಲ ಕಡಲೆ ತಾಳಿ ಒಣಕೊಬ್ಬರಿ 
ಜೊತೆಇಟ್ಟಾಗಲೇ ಮುಹೂರ್ತಕಾಲ 

ಇಲ್ಲವಾದರೆ ಜೀವನ ಪೂರ್ತಿ 
ಕಂಡು ಕೇಳರಿಯದಾ ಬರಗಾಲ .. ಬರಗಾಲ !!