ಮಂಗಳವಾರ, ಸೆಪ್ಟೆಂಬರ್ 12, 2017

ಸತ್ಯದರ್ಶನ

ದಣಿದ ಜೀವನ ಸಾಗರವ ದಾಟಲು  
ಕೊನೆಯ ದೋಣಿ ಬಂದಿದೆ 
ಹಣೆಯ ಬರಹ  ಬದಲಾಗಿಸಲು 
ಅಣಿಯಾಗಿ ಹುಟ್ಟು ಹಾಕಿದೆ 

ಗಳಿಸಿದ್ದೆಲ್ಲವ ತೊರೆದು ಬಂದೆವು 
ಮುಳುಗೋ ಊರಲಿ ಸೂತಕ ತುಂಬಿದೆ 
ಬಾಳಿ ಬದುಕಿದ ಮನೆಮಠ ಗುಡಿಗಳು 
ಕಳೆಗುಂದಿ ನಿಂತು ಮೂಕಪ್ರೇಕ್ಷರಾಗಿವೆ      

ಅದೆಷ್ಟೋ ಕತೆಗಳು ಸಾರಿ ಹೇಳಿಲು        
ಬದುಕು ಬೆಸೆದ ಮೆಟ್ಟಿಲು ಮುಂದಿವೆ 
ನದಿಯ ಅಂಚಲಿ ಲವಲವಿಕೆ ಇತ್ತು 
ಬದಲಾಗಿ ನೀರವ ಮೌನ  ತುಂಬಿದೆ

ತ್ಯಾಗ ಬದುಕಿನ ಮೂಲ ಸೂತ್ರ 
ಭೋಗ  ಪಡಬೇಕು ಇಲ್ಲಿ ಇರುವವರೆಗೆ 
ಸಾಧ್ಯವೇ ಗಳಿಸಿದ್ದೆಲ್ಲಾ ಕೊಂಡು ಹೋಗಲು 
ಸತ್ಯದರ್ಶನ ಎಲ್ಲರಿಗೂ ಆಗಬೇಕಿದೆ 


-- ಪ್ರಭಂಜನ ಮುತ್ತಿಗಿ