ಗುರುವಾರ, ಫೆಬ್ರವರಿ 13, 2025

ಪಂಚಮಿ

 

ಪಂಚಮಿ 


ಬನ್ನಿರೇ ಭಾಮೆಂಗಳೆಲ್ಲಾ 
ತನಿ ಎರೆಯುವ ನಾಗರಾಜಗೆ
ಹೊನ್ನ ಒಡವೆಯ ಹಾಕಿಕೊಂಡು
ಚನ್ನಾಗಿ ಶೃಂಗರಿಸಿ ಕೊಳ್ಳುತಾ  

ಅರಿಶಿನ ಕುಂಕುಮ ಹಣ್ಣು ಹೂವು
ಕರದಿ ವೈಯಾರದಿ ನೆಡೆಯುತಾ
ಹುರಿದ ಕಡಲೆ ತಂಬಿಟ್ಟು ಚಿಗುಳಿ
ತೆರೆದು ನೈವೇದ್ಯ ಮಾಡುತಾ

ಪನ್ನಗನನ್ನು ಪ್ರಸನ್ನಗೊಳಿಸಿ
ಕನ್ನೆಯರು ವರಗಳ ಕೇಳುತಾ
ಬೆನ್ನಹುರಿಗೆ ಹಾಲ ಹಚ್ಚುತಾ
ಅಣ್ಣ ತಮ್ಮಗೆ ಆಯಸ್ಸು ಬೇಡುತಾ 

 
-ಪ್ರಭಂಜನ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ