ಪಂಚಮಿ
ಬನ್ನಿರೇ ಭಾಮೆಂಗಳೆಲ್ಲಾ
ತನಿ ಎರೆಯುವ ನಾಗರಾಜಗೆ
ಹೊನ್ನ ಒಡವೆಯ ಹಾಕಿಕೊಂಡು
ಚನ್ನಾಗಿ ಶೃಂಗರಿಸಿ ಕೊಳ್ಳುತಾ
ಅರಿಶಿನ ಕುಂಕುಮ ಹಣ್ಣು ಹೂವು
ಕರದಿ ವೈಯಾರದಿ ನೆಡೆಯುತಾ
ಹುರಿದ ಕಡಲೆ ತಂಬಿಟ್ಟು ಚಿಗುಳಿ
ತೆರೆದು ನೈವೇದ್ಯ ಮಾಡುತಾ
ಪನ್ನಗನನ್ನು ಪ್ರಸನ್ನಗೊಳಿಸಿ
ಕನ್ನೆಯರು ವರಗಳ ಕೇಳುತಾ
ಬೆನ್ನಹುರಿಗೆ ಹಾಲ ಹಚ್ಚುತಾ
ಅಣ್ಣ ತಮ್ಮಗೆ ಆಯಸ್ಸು ಬೇಡುತಾ
-ಪ್ರಭಂಜನ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ