ಕುಸುಮದಲಿ ಅರಳಿ
ಶರ ವೇಗದಲಿ ಪ್ರೀತಿಸಿ
ಭಾಮಿನಿಯಲಿ ಮುಳಗಿ
ಭೋಗದಲಿ ತೇಲಾಡಿ
ವಾರ್ಧಿಕದಲಿ ಎದ್ದು
ಪರಿವರ್ಧಿನಿಯಲಿ ಅರಿತು
ಉದ್ದಂಡ ನಾಮ ಪಡೆದರೇನಂತೆ
ಕಂದ, ವೃತ್ತ, ರಗಳೆಗಳಿಲ್ಲದೆ
ಎಳೆ, ತ್ರಿಪದಿ, ಚೌಪದಿ ಷಟ್ಪದಿ
ಆದಿ, ಅಂತ್ಯ ಮಧ್ಯ ಪ್ರಾಸದ
ತ್ರಾಸವಿಲ್ಲದೆ ಭಾವಪೂರ್ಣ ಕವನವ
ಬರೆದರೆ ಓದಲೋಲ್ಲರೇ ಜಗದೊಳು
-ಪ್ರಭಂಜನ.