ಬುಧವಾರ, ಏಪ್ರಿಲ್ 18, 2018

ಕದ್ದ ಮಡಿಕೆ ತೋರು

ನಂದಗೋಕುಲದಲ್ಲಿ
ಮಿಂದ ನಮ್ಮ ಮಡಕೆಗಳ  
ತಂದು ಜೋಡಿಸಿರುವೆ ನೀ 
ಕಂದನಲ್ಲವೋ  ಕೃಷ್ಣ 

ಬೆಣ್ಣೆ ತುಂಬಿ ತರುತಿದ್ದೆ 
ಹಣ್ಣು ಹಾಲು ತುಂಬುತ್ತಿದ್ದೆ  
ತಣ್ಣನೆಯ ಮೊಸರು ಮಾರುತಿದ್ದೆ 
ಕ್ಷಣದಲ್ಲಿ ಕದ್ದು ತಂದೆ  ಕೃಷ್ಣ  

ಸುಣ್ಣದಿಂದ ಚಿತ್ರ ಬಿಡಿಸಿ 
ಬಣ್ಣ ತುಂಬಿದ ನನ್ನ ಮಡಿಕೆ 
ಕಣ್ಣು ಬಿಟ್ಟು ಹುಡುಕಿದರೂ 
ಸಣ್ಣ ಕುರುಹು ಇಲ್ಲ ಕೃಷ್ಣ 

ಸಭ್ಯನಲ್ಲವೇ ನೀನು   
ಲಭ್ಯವಿದ್ದರೆ ನನ್ನ ಮಡಿಕೆ ತೋರು 
ಅಭ್ಯಂಜನ ಮಾಡಿಸಿ ಬೆಣ್ಣೆ ಕೊಡುವೆ  
ಪ್ರಭಂಜನನಂತೆ ಬಾರೋ ಕೃಷ್ಣ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ