ಬುಧವಾರ, ಏಪ್ರಿಲ್ 18, 2018

ಶ್ರೀ ಶೇಷಾಗಿರಿರಾವ್

ಹೂವ್ವಿನ ಹಡಗಲಿ ವಾಸ
ಶ್ರೀ ಶೇಷಗಿರೀಶ
ಮಲ್ಲಿಗೆ ತೋಟದಲ್ಲಿ
ಮಾನವೀಯತೆಯ ಹೂ ಬೆಳೆದ \\ ಪ \\

ಬರವಣಿಗೆಯ ಮೂಲಕ ಬಡೆದಿಬ್ಬಿಸಿ 
ಜನಜಾಗೃತಿ ಮೂಡಿಸಿದ ಕವೀಶ   
ಬರೆದಂತೆ ನುಡಿದು ನುಡಿದಂತೆ ನೆಡೆದು  
ಮನುಷತ್ವಕ್ಕೆ ಆದರ್ಶಪ್ರಾಯರಾದ  1.

ಅವರವರ ಧರ್ಮ ಆಚರಣೆಗೆ
ಬೆಲೆಕೊಟ್ಟು ಎಲ್ಲರೊಂದಿಗೆ ಬೆರೆತ 
ಬವಣೆಗಳು ಎಷ್ಟೇ ಬಂದರೂ
ಬಿಡದೆ ತನ್ನ ನೈಜ ಧರ್ಮ ಪಾಲಿಸಿದ  2

ಭಾವನೆಗಳಿಗೆ ಬೆಲೆಕೊಟ್ಟು ಬೆಳೆಸಿದ
ಬಾಲ ಕವಿಗಳೆಷ್ಟೋ ನಾನರಿಯೆ
ಬದುಕಿದರೆ ಹೀಗೇ ಬದುಕಬೇನೆಂದು ತೋರಿ
ಬಾರದ ಲೋಕಕ್ಕೆ ಇಷ್ಟುಬೇಗ ಹೋದದ್ದು ಸರಿಯೇ 3

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ