ಗುರುವಾರ, ಏಪ್ರಿಲ್ 9, 2009

ದೀಪಾವಳಿ


ಬಂತು ಮತ್ತೆ ದೀಪಾವಳಿ,
ಶರದ್ಋತುವಿನ ಚಳಿಯೊಂದಿಗೆ..
ತುಂತುರು ಹನಿ ಮಳೆಯಲ್ಲಿ..
ಕೆಸರಿನ ನಡು ರಸ್ತೆಯಲ್ಲಿ..

ಕೆಂಪು ಪಟಾಕಿಯ ಧಂ ಧಂ ಶಬ್ದ..
ಸುರ್ ಎಂದು ಹಾರುವ ರಾಕೆಟ್ ..
ಧೂಪನೆ ಮಳೆ ಕರದಂತೆ..
ಹೂಕುಂಡ... ಭೂಚಕ್ರ
ಸುರು ಸುರು.. ಎನ್ನುವ ದೀಪದ ಕಡ್ಡಿ..
ಯುಧ ನೆನಪಿಸುವ ಬಾಂಬ್ ಪಟಾಕಿ..
ಒಂದೇ ಎರಡೇ,

ಇವೆಲ್ಲದರ ಮಧ್ಯ
ಸಂಸ್ಕೃತಿ ನೆನಪಿಸುವ..
ಆಕಾಶ ಬುಟ್ಟಿ,..ಮಣ್ಣಿನ ಹಣತೆ..
ಬೆಚ್ಚಗಿನ ಬತ್ತಿ ತುದಿಯಲ್ಲಿ ಬೆಳಗುತಿದೆ ದೀಪ..
ಹೇಳುತಿದೆ ನೀತಿ..

ಜ್ಞಾನ ವೆಂಬ ದೀಪ ಉರಿಸಲು..
ಅಜ್ಞಾನ ಎಂಬ ಎಣ್ಣೆಯಿಂದ,
ಬತ್ತಿ ಎಂಬ ಅಹಂಕಾರವ ಸುಟ್ಟು,
ಪ್ರಕಶಿಸಲಿ ನಿಮ್ಮ ಮನೆ ಮನ....

ಎಷ್ಟೊಂದು ಅರ್ಥ ಗರ್ಭಿತ .. ಈ ದೀಪಾವಳಿ..
ನಮ್ಮ ಅಜ್ಞಾನ ಕೆಳರಿಯದಸ್ಟು.....ಈಗ...
ನಮ್ಮ ಅಹಂಕಾರ.. ನಿಳುಕದಸ್ಟು.. ಬೇಗ.. ಈಗ ಈಗ ...

ಹೇ, ದೀಪಾವಳಿ.. ವರುಷಕೊಮ್ಮೆ ಬೇಡ..
ಬರುತಾನೆ ಇರು ದಿನಕ್ಕೊಮ್ಮೆ..
ಎಲ್ಲರ ಮನದಲ್ಲಿ.. ಮನೆಗಳಲ್ಲಿ..

ಪ್ರಭಂಜನ ಮುತ್ತಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ