ಗುರುವಾರ, ಜುಲೈ 16, 2015

***ಕಾಡುಕೆಡಿಸೋ ಮೊದಲು ***


ಒಣಗಿ ಹೋದ ಮರವು ಹಳೆಯ 
ಕಥೆಯ ಹೇಳಲು ಬಯಸಿದೆ  
ಕಮರಿ ಹೋದ ಆಸೆ ವ್ಯೆಥೆಯ 
ಕೇಳಲು ಯಾರಾದರು  ಬರುವರೆ?

ಹಸಿರ ತುಂಬಿ ಉಸಿರ ಕೊಡುವ  
ಹರುಷವು  ಮರೆತುಹೋಗಿದೆ 
ಹಣ್ಣು ಹೂಗೆ ದುಂಬಿ ಬಣ್ಣ ತುಂಬಿ 
ಹಕ್ಕಿ ಚಿಟ್ಟೆ ಇಲ್ಲದೆ ಬರಡಾಗಿದೆ 

ನೀರು ಇಲ್ಲದೆ ಬೆಳೆಯಲಾರೆವು 
ಎಂಬ ಸತ್ಯವು ನಮಗೆ ಅರಿವಿದೆ 
ನೀರು ನಿಲ್ಲಿಸಿ ಕತ್ತ  ಕೊಯ್ದರು 
ಕಣ್ಣೇರು  ಹಿನ್ನಿರಲಿ ಬೆರೆತಿದೆ 

ಅರ್ಧ ಸಾಯಿಸಿ ಹಿಂಸಿಸಿಹರು 
ಜೀವ ನಲುಗಿದೆ ಸಾಯಲಾರದೆ
ದೋಣಿಯಲ್ಲಿ  ತೇಲುವ ಜನ 
ದಾರಿಗಡ್ಡ  ಎಂದು ತೆಗಳುತಲೇ  !!

ಎಂದು ಏನೋ ಮುಕ್ತಿ ನಮಗೆ 
ಒಂದೂ ಕ್ಷಣ  ತಿಳಿಯದಾಗಿದೆ 
ಮುಂದೆ ಕಾಡುಕೆಡಿಸೋ ಮೊದಲು 
ಮುಂದಾಲೋಚನೆ ಬೇಕಾಗಿದೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ