ಶುಕ್ರವಾರ, ಮೇ 18, 2018

ದೊಡ್ದುರ ಸೇರಿದೆವು

ನಮ್ಮೂರ ದಾರಿ ಬಿಟ್ಟು ದೊಡ್ದುರ ಸೇರಿದೆವು
ಬೆಳೆ  ವಣಗಿತು ಮಳೆ ಬರದೇ  ಕಾಡಿ 
ಬಿತ್ತಿ ಬೆಳೆಯುವ ಕೈಗೆ ಅದಿರಿನ  ಬುಟ್ಟಿ ಬಂತು
ಹೊತ್ತು ಸಾಗಿಸಬೇಕಿದೆ ಕನಸ ದೂಡಿ
ಗುಳೆ ಎದ್ದು ಬಂದಿದೀವಿ ಹಸು ಕರು ಹೇಗಿವೆಯೋ
ಚಿಂತೆ ತುಂಬಿದೆ ಮನಸಲ್ಲಿ  ನೋವ ಮೂಡಿ
ಜಾತಿ ಕುಲವೆನ್ನದೆಯೇ ಜೊತೆಯಾಗಿ ನಾವೆಲ್ಲ
ದುಡಿದು ಊರ ಸೇರಬೇಕಾಗಿದೆ ನೋಡಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ