ಗುರುವಾರ, ನವೆಂಬರ್ 17, 2016

ಗೋವಿಂದ

ಕೃಷ್ಣ ನಿನ್ನ ಕಣ್ಣ ನೋಟ 
ನೋಡಲೆಷ್ಟು ಅಂದ   .... ಪ 
ಸಣ್ಣ ಕೊಳಲನೂದುತ 
ಕಣ್ಣು ಹೊರಳಿಸುವುದೇ ಚಂದ --- ಆ ಪಲ್ಲ 

ಅಂಬೆಗಾಲು ಇಡುತ ಬರುವ 
ಮಂದಹಾಸ ವೆಷ್ಟು ಚಂದಾ 
ನೊಂದ ಮನಸುಗಳಿಗೂ ನೀ  ಆ-
ನಂದ ತರುವೇ  ನಗುವಿಂದಾ  

ಹಾಲು ಮೊಸರು ಬೆಣ್ಣೆ ಕದ್ದು 
ಕಾಲುಕಿತ್ತಿದೆ ಮನೆಯಿಂದ 
ಬಾಲ ಲೀಲೆಗಳ ಬಣ್ಣಿಸಲಾರೆ 
ಆಲಯದೊಳು ಬಾ ಗೋವಿಂದಾ   

ಗೋವರ್ಧನ ಗಿರಿಯನೇ ಎತ್ತಿ 
ಹಾವು ಹೆಡೆಮುರಿದೆ ಕಾಳಿಂಗಾ     
ಮಾವು ತೋಟದಲಿ ಹಾಲು ಕುಡಿದು 
ಜೀವ ಹೀರಿದೆ ಪೂತನಿ ಎದೆಯಿಂದ   

ಕರೆದು ಗೋಪಿಯರ ಕೈಯ ಹಿಡಿದು 
ಮರೆಸಿ ಆವರಿಸಿದೆ ಮೋಹದಿಂದ 
ಸೆರೆಗ ಎಳೆಯುತಾ ಮಡಿಕೆ ಒಡೆಯುತಾ 
ತೋರುತಿಹೆ ಆಟ  ಮುದದಿಂದಾ  
 
ಪ್ರೀತಿಯಿಂದ ಬೇಡಿಕೊಂಬೆ ಬಾ 
ಪ್ರಭಂಜನನ ಹೃದಯದೊಳಗಿಂದ 
ಪ್ರತೀದಿನವೂ ನಿನ್ನಾರಾಧಿಸಿ  
ಪ್ರಾರ್ಥಿಸುವೆ ಸಲಹೋ ದಯದಿಂದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ